Tuesday, February 3, 2009

ಭಾವಪೂರ್ಣ ಶ್ರದ್ಧಾಂಜಲಿ...

ಯಕ್ಷಲೋಕದ ಧೀಮಂತ ಚೇತನ,ಕೆರೆಮನೆ ಶಂಭು ಹೆಗಡೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕಲೆಗಾಗಿ ಜೀವವನ್ನೇ ಮುಡಿಪಾಗಿಟ್ಟ ಶಂಭು ಹೆಗಡೆಯವರ ವ್ಯಕ್ತಿತ್ವ ಅನೇಕ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವರ ಅಕಾಲಿಕ ಮರಣ ಯಕ್ಷ ಲೋಕಕ್ಕೆ ಹೊಡೆದ ಆಘಾತವೇ ಸರಿ, ಆ ಇಡಗುಂಜಿ ಮಹಾಗಣಪತಿ ಅವರ ಕುಟುಂಬಕ್ಕೆ ಇದನ್ನು ಸಹಿಸಿಕೊಳ್ಳುವ ತಾಳ್ಮೆ ಕೊಡಲಿ ಎಂಬ ಪ್ರಾರ್ಥನೆ ಮಾತ್ರ ನಮ್ಮದು.
ವ್ಯಕ್ತಿ ಸಾಯಬಹುದು ಆದರೆ ಕಲೆಗೆ ಸಾವಿಲ್ಲ, ಕಲೆ ನಿತ್ಯ ನಿರಂತರ ಹರಿಯುವ ನೀರಿನಂತೆ. ಇನ್ನೊಬ್ಬ ಶಂಭು ಹೆಗ್ಡೆ ಬೇಗನೆ ಹುಟ್ಟಿ ಬರಲಿ ಎಂಬ ಆಶಯ ಸಮಸ್ತ ಯಕ್ಷ ಪ್ರಿಯರದು.ಸದಾ ನಿಮ್ಮವ- ಗುರು ಬಬ್ಬಿಗದ್ದೆ

No comments: