Saturday, November 7, 2009

ಏನಾಯ್ತೆ ಗೆಳತಿ

                  ಯಾಕೆ ಗೆಳತಿ ನಿನ್ನ ಮುಖವು ಹೀಗೆ ಬಾಡಿದೆ 
                  ಚಂದ್ರ ಕಿರಣ ಕೂಡ ಬೆಂಕಿ ಮಳೆಯ ಸುರಿಸಿದೆ 
                  ಮುದ್ದು ಮೊಗದ ನಿನ್ನ ನೋಟ ಎಲ್ಲಿ ಹೋಗಿದೆ 
                  ಹಂಸದಂಥ ನಡಿಗೆಯಿಂದು ಭಾರವಾಗಿದೆ ಗೆಳತಿ ಕಾಣದಾಗಿದೆ 


                  ಹಕ್ಕಿ ಕೂಡ ಹಾಡಲಿಲ್ಲ ನಿನ್ನ ನೋಡದೆ 
                  ಕೋಳಿ ತಾನು ಕೂಗಲಿಲ್ಲ ಮುಖವ ಕಾಣದೆ 
                  ರವಿಯು ಕೂಡ ಬಾಡಿ ಹೋದ ಬಿಸಿಲು ಬೀರದೆ 
                  ನಿನ್ನ ಮನದ ಬೇಗೆಯನ್ನು ಹೇಳಬಾರದೇ ಗೆಳತಿ ನೋಡಲಾಗದೆ


                  ಚದುರಿ ಹೋಯ್ತು ಮೋಡವೆಲ್ಲ ಮಳೆಯ ಸುರಿಸದೆ 
                  ಬೀಸೊ ಗಾಳಿ ಮೌನವಾಯ್ತು ತಂಗಾಳಿ ಸೂಸದೆ 
                  ಹರಿಯೋ ನದಿಯೂ ಹರಿಯಲಿಲ್ಲಂಬಿಗನ ಕಾಣದೆ  
                  ನಿನ್ನ ಚಿಂತೆ ದೂರ ಮಾಡ್ವೆ ಹೇಳು ನನ್ನೆದೆ, ಗೆಳತಿ ಬಳಿಗೆ ಬಾರದೆ


                  ದೂರ ಕಡಲು ಹರಿವ ತೆನೆಯು ನಿಂತು ನೋಡಿದೆ  
                  ಬಾನ ರವಿಯು ಚಂದ್ರಮಂಗೆ ದಾರಿ ತೋರಿದೆ 
                  ಕತ್ತಲಲ್ಲಿ ಬೆಳಕ ತುಂಬಿ ಲಾಲಿ ಹಾಡಿದೆ 
                  ನಿನ್ನ ಬಿಂಬ, ಚಂದ್ರ ಬಿಂಬ ಒಂದೆ ಆಗಿದೆ ಗೆಳತಿ ಮನಸು ತುಂಬಿದೆ

64 comments:

Me, Myself & I said...

ಕವನಗಳ ಮೂಲಕ ಬರೆದ್ರೆ, ಎರ್ಡ್ಮೂರು ಪುಟಗಳಷ್ಟು ವಿಷ್ಯನ ಸರಳ್ವಾಗಿ ಒಂದೇ ಪುಟದಲ್ಲಿ ಹೇಳ್ಬೌದು = ಹಾಗಂತ ಹಂಸಲೇಖ ಹೇಳಿದ್ದು ಜ್ಞಾಪ್ಕಾ ಬಂತು.
ಕವನಗಳನ್ನ ಬರಿಯೊ ಕಲೆ ನಿಮ್ಗೆ ಸಿಧ್ದಿಸಿದೆ.
ಅಭಿನಂದನೆಗಳು.

ಅಂತರ್ವಾಣಿ said...

ಡಾ|
ಮತ್ತೊಂದಿ ಸುಂದರ ಕವನ. ಇದನ್ನು ನಾನು ಓದೋಕೆ ಹೋಗಲಿಲ್ಲ.. ನನಗೆ ತೋಚಿದ ರಾಗ, ತಾಳ ಸೇರಿಸಿ ಹಾಡಿಕೊಂಡೆ.

ಜಲನಯನ said...

ಡಾ.ಗುರು, ಕವನ ಸೆಳೆತವನ್ನು ಎಳೆದೊಯ್ದು ಕಡೆಯ ಪಾದಕ್ಕೆ ಬೀಳಿಸಿ ಮೊಟಕಾದ ಸಾಲು ಉತ್ತಮ ಅಂತ್ಯ ಮತ್ತು ಅರ್ಥ ನೀಡಿವೆ..ಪ್ರಾಸವೂ ಕೂಡಿ ಸಾಲುಗಳು ಮತ್ತೆ ಮತ್ತೆ ಓದುವಂತೆ ಇವೆ...ಸಂಶೋಧನೆಯ ನಡುವಿನ ಈ ಶೋಧ ಅಪೂರ್ವವಾಗಿ ಮೂಡಿದೆ.

ಸಾಗರದಾಚೆಯ ಇಂಚರ said...

ಆತ್ಮೀಯ,
ನಿಮ್ಮ ಪ್ರೀತಿಯ ಹಾರೈಕೆ ಸದಾ ಇರಲಿ, ನನ್ನ ಕವನಕ್ಕೆ ನೀವೇ ಬ್ಲಾಗಿಗರು ಸ್ಪೂರ್ತಿ

ಸಾಗರದಾಚೆಯ ಇಂಚರ said...

ಅಂತರ್ವಾಣಿ,
ರಾಗ ಹಾಕಿ ಹಾಡುವಷ್ಟು ಒಳ್ಳೆಯ ಕವನ ಹೌದೋ ಅಲ್ಲವೋ ಗೊತ್ತಿಲ್ಲ,
ಆದರೆ ನಿಮ್ಮ ನುಡಿಗಳು ಇನ್ನು ಉತ್ಸಾಹ ನೀಡಿವೆ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಲನಯನ ಡಾ.
ಸಂಶೋಧನೆಯ ನಡುವೆ ಇಂಥಹ ಕವನ ಗಳು ಮನಸ್ಸಿಗೆ ಮುದ ನೀಡಿವೆ,
ಇಲ್ಲದಿದ್ದರೆ ಸದಾ ೪ ಗೋಡೆಗಳ ಮದ್ಯೆ ಸಂಶೋಧನೆ ಮಾಡುತ್ತಾ ಹೊರಗಿನ ಪ್ರಪಂಚದ ಸುಳಿವೇ ಸಿಗದ ವಾತಾವರಣ ಏರ್ಪಡುತ್ತಿತ್ತು
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ

Ittigecement said...

ಗುರುಮೂರ್ತಿಯವರೆ...

ಪ್ರೇಮ ಭಾವ...
ಅಭಿಮಾನ, ಕಾಳಜಿಯನ್ನು ಬಿಂಬಿಸುವ ಈ ಕವಿತೆ ಬಹಳ ಚೆನ್ನಾಗಿದೆ..

ಈ ಹಾಡು ಕೇಳಿದ ನಿಮ್ಮ ಗೆಳತಿ ಏನಂದಳು...?

ಅಭಿನಂದನೆಗಳು ಚಂದದ ಕವಿತೆಗೆ....

ಸುಮ said...

ಕವನ ತುಂಬ ಚೆನ್ನಾಗಿದೆ.

ಮನಸು said...

ಗುರು,
ತುಂಬಾ ಚೆನ್ನಾಗಿದೆ, ಈ ಕವನಕ್ಕೆ ನಿಮ್ಮ ಗೆಳತಿಯಿಂದ ಉತ್ತರ ಬಂತೆ..? ನಿಮ್ಮ ಕಾಳಜಿ ಎದ್ದು ಕಾಣುತ್ತದೆ...

Manju Bhat said...

ಗುರು,
ತುಂಬಾ ಚೆನ್ನಾಗಿದೆ.ನಿಜವಾಗಲೂ ನೀನು ಕವಿನೆ ಕಣೋ.

Raghu said...

ಕವನ ತುಂಬ ಚೆನ್ನಾಗಿದೆ.
Raaghu.

ಸವಿಗನಸು said...

ಗುರು,
ಸುಂದರ ಕವನ...ಅಲ್ಲ ಹಾಡು ಅಂತಾನೆ ಹೇಳಬಹುದು...
ನಿಮ್ಮ ಕವನಕ್ಕೆ ನಿಮ್ಮ ಗೆಳತಿಯ ಪ್ರತಿಕ್ರಿಯೆ ನಿಮ್ಮ ಮುಂದಿನ ಕವನದ ಮೂಲಕ ಹೇಳಿ.....
ಚೆನ್ನಾಗಿತ್ತು...
ಅಭಿನಂದನೆಗಳು...

sunaath said...

ಗುರು,
ಗೆಳತಿಯ ಬಗೆಗೆ ಉತ್ಕಟ ಪ್ರೀತಿ ಹಾಗು ಕಾಳಜಿ ಇರೋರೇ ಇಂತಹ ನವಿರಾದ ಕವನ ಬರೆಯಬಲ್ಲರು. ನಿಮ್ಮ ಗೆಳತಿಯೇ ಪುಣ್ಯವಂತೆ!

shivu.k said...

ಡಾ.ಗುರು ಸರ್,

ಪ್ರೇಮದ ತೀವ್ರತೆಯನ್ನು ಸುಂದರವಾಗಿ ಹೇಳಿದ್ದೀರಿ.

ಕವನದಲ್ಲಿ ವಿಚಾರವನ್ನು ಹೇಳುವ ಕಲೆ ನಿಮಗೆ ಚೆನ್ನಾಗಿ ಸಿದ್ಧಿಸಿದೆ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನನ್ನ ಗೆಳತಿ ಇನ್ನಾರೂ ಅಲ್ಲ, ನನ್ನ ಮನದನ್ನೆಯೇ,
ಅವಳ ಮನಸ್ಸಿನ ಬೇಸರ ನೀಗಿಸಲು ಬರೆದ ಕವನವಿದು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಮಾ,
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಸು,
ನನ್ನ ಗೆಳತಿಗೆ ತುಂಬಾ ಸಮಾಧಾನ ಲಭಿಸಿತು ಕವನದಿಂದ :)
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮಂಜು,
ಪ್ರೀತಿ ಹೀಗೆಯೇ ಇರಲಿ
ಬರ್ತಾ ಇರು

ಸಾಗರದಾಚೆಯ ಇಂಚರ said...

ರಾಘು,
ಹೀಗೆಯೇ ಬರ್ತಾ ಇರಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸವಿಗನಸು ಮಹೇಶ್ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಖಂಡಿತ ಮುಂದೊಮ್ಮೆ ಗೆಳತಿಯ ಉತ್ತರ ಬರೆಯುತ್ತೇನೆ
ಬರುತ್ತಿರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ನಿಮ್ಮ ಪ್ರೀತಿ, ಹಾರೈಕೆ ಹೀಗೆಯೇ ಇರಲಿ
ಗೆಳೆತನಕ್ಕೆ ಬೆಲೆ ಕಟ್ಟಲಾದೀತೆ?
ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ಹಾರೈಕೆ ಹೀಗೆ ಇರಲಿ,
ಕವನ ದಲ್ಲಿ ಇನ್ನು ಪ್ರಭುತ್ವ ಲಭಿಸಿಲ್ಲ, ಕೆಲವೊಮ್ಮೆ ಶಬ್ದಗಳಿಗೆ ತಡಕಾಡುತ್ತೇನೆ/
ಬರುತ್ತಿರಿ

ದೀಪಸ್ಮಿತಾ said...

ಕವನ ತುಂಬಾ ಚೆನ್ನಾಗಿದೆ. ನಾನು ಸಾಮಾನ್ಯವಾಗಿ ಕವನಗಳನ್ನು ಓದುವುದಿಲ್ಲ, ಆದರೆ ನಿಮ್ಮದು ಓದಿದಾಗ ಚೆನ್ನಾಗಿದೆ ಅನ್ನಿಸಿತು

Snow White said...

ನಿಮ್ಮ ಕವನ ಬಹಳ ಇಷ್ಟವಾಹಿತು ಸರ್..ಇದನ್ನು ಓದಿದ ನಿಮ್ಮ ಗೆಳತಿ ಖಂಡಿತ ನಗುಸೂಸಿರುತಾರೆ ಎಂದು ನಂಬಿದೇನೆ.. :)

ಸೀತಾರಾಮ. ಕೆ. / SITARAM.K said...

ಮುನಿದ/ನೊ೦ದ ಮನದನ್ನೆಯ ಮನವನ್ನು ತಿಳಿಯಾಗಿಸಲು ಹೊಸೆದ ಕಾವ್ಯ ಸಾಲುಗಳು ಅದ್ಭುತವಾಗಿದೆ. ಗುರುಮೂರ್ತಿಯವರೇ ಚೆ೦ದವಿದೆ ತಮ್ಮ ಕವನ.

PARAANJAPE K.N. said...

ಭಾವಗೀತಾತ್ಮಕವಾದ ಪ್ರೇಮನಿವೇದನೆಯ ಗೀತೆ. ಚೆನ್ನಾಗಿದೆ. ಮುಂದುವರಿಯಲಿ ನಿಮ್ಮ ಪ್ರೇಮ ಗೀತೆ ಗಳ ಸರಣಿ

ದಿವ್ಯಾ ಮಲ್ಯ ಕಾಮತ್ said...

ಗುರು, ಕವನ ತುಂಬಾ ಆತ್ಮೀಯವಾಗಿದೆ...

ತೇಜಸ್ವಿನಿ ಹೆಗಡೆ said...

ಕವನ ಚೆನ್ನಾಗಿದೆ. ಅದರಲ್ಲೂ ಕೊನೆಯ ಚರಣ ತುಂಬಾ ಇಷ್ಟವಾಯಿತು.

ಸಾಗರದಾಚೆಯ ಇಂಚರ said...

ದೀಪಸ್ಮಿತ
ನನ್ನ ಕವನ ನಿಮಗೆ ಸಂತೋಷ್ ನೀಡಿದರೆ ನನ್ನ ಬರವಣಿಗೆ ಸಾರ್ಥಕ,
ನಿಮ್ಮ ಮೆಚ್ಚುಗೆಯ ಮಾತುಗಳೇ ನನಗೆ ಪ್ರೋತ್ಸಾಹ

ಸಾಗರದಾಚೆಯ ಇಂಚರ said...

Snow White
ನಿಮಗೆ ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ,
ಗೆಳತಿ ತುಂಬಾ ಸಂತಸಗೊಂಡಳು ಕವನ ನೋಡಿ

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್,
ನಿಮ್ಮ ಮಾತುಗಳೇ ಇನ್ನಷ್ಟು ಕವನ ಬರೆಯಲು ಪ್ರೋತ್ಸಾಹ ನೀಡಿವೆ,
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಇರಲಿ
ಕವನವನ್ನು ತಿದ್ದಿ ತೀಡುತ್ತಿರಿ
ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ

ಸಾಗರದಾಚೆಯ ಇಂಚರ said...

ದಿವ್ಯ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ಕವನ ಬರೆಯುವಾಗ ಶಬ್ದಗಳೇ ಸಿಗದೇ ಒದ್ದಾಡುವ ಪರಿಸ್ಥಿತಿ ಎಷ್ಟೋ ಸಲ ಎದುರಾಗಿದೆ, ಅದು ನಿಮಗೂ ಗೊತ್ತಿದೆ,
ಬರೆದ ಸಾಲುಗಳು ಓದುಗರಿಗೆ ಇಷ್ಟವಾದರೆ ಬರಹಗಾರ ಸಾರ್ಥಕ್ಯನಾದಂತೆ ಅಲ್ಲವೇ

ವಿನುತ said...

ಸೊಗಸಾದ ಕವನ. ಭಾವ ಹಂದರ ವಿಶಿಷ್ಟವಾಗಿದೆ. ಲಯಬಧ್ದವಾಗಿದೆ. ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ವಿನುತ,
ಕಾಮೆಂಟಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

ಶಿವಪ್ರಕಾಶ್ said...

ತುಂಬ ಚೆನ್ನಾಗಿದೆ ಸರ್ :)

ಸಾಗರದಾಚೆಯ ಇಂಚರ said...

ಶಿವೂ ಸರ್
ತುಂಬಾ ಧನ್ಯವಾದಗಳು ನಿಮ್ಮ ಕಾಮೆಂಟಿಗೆ,
ಬರ್ತಾ ಇರಿ

AntharangadaMaathugalu said...

ಸಾರ್... ಕವನ ಭಾವಪೂರ್ಣವಾಗಿದೆ. ನಂಗಿಷ್ಟವಾಯಿತು.

ಶ್ಯಾಮಲ

ಚುಕ್ಕಿಚಿತ್ತಾರ said...

ಗುರು..ಅವರೆ...

ನಿಮ್ಮ ಭಾವನೆಗಳನ್ನ ಶಬ್ಧಗಳಲ್ಲಿ ಚೆನ್ನಾಗಿ ಜೋಡಿಸಿದ್ದೀರಿ.

ಸು೦ದರ ಕವನ...

ಇಷ್ಟವಾಯಿತು.

ವ೦ದನೆಗಳು.

ಸಾಗರದಾಚೆಯ ಇಂಚರ said...

ಶ್ಯಾಮಲಾ ಮೇಡಂ,
ಬ್ಲಾಗಿಗೆ ಸ್ವಾಗತ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಪ್ರೋತ್ಸಾಹಿಸುತ್ತಿರಿ
ಬರೆದ ಕವನ ಓದುಗರಿಗೆ ಇಷ್ಟವಾದರೆ ಕವನ ಸಾರ್ಥಕ್ಯ ಹೊಂದಿದಂತೆ ಅಲ್ಲವೇ

Parisarapremi said...

geLati ge enaadru gift kodi pa.... illa andre haage ne avaLu... ;-)

ಸಾಗರದಾಚೆಯ ಇಂಚರ said...

Gift kodtane irtivi sir :)
abhipraayakke dhanyavaadagalu

ದಿನಕರ ಮೊಗೇರ said...

ಗುರು ಸರ್,
ಗೆಳತಿಯನ್ನು ಪಟಾಯಿಸಲು ತುಂಬಾ ಚೆಂದವಿರುವ ಕವಿತೆ ಬರೆದಿದ್ದೀರಾ........... ಹಮ್....... ಹೇಗಿದೆ ಅವರ ಪ್ರತಿಕ್ರೀಯೆ.....

ಸಾಗರದಾಚೆಯ ಇಂಚರ said...

ದಿನಕರ ಸರ್,
ಗೆಳತಿ ಖುಷಿಯಾಗಿದ್ದಾಳೆ
ಅಭಿಪ್ರಾಯಕ್ಕೆ ಧನ್ಯವಾದಗಳು

Dileep Hegde said...

ತುಂಬಾ ಸೊಗಸಾದ ಕವಿತೆ... ತುಂಬಾ ಇಷ್ಟವಾಯ್ತು.. ಇನ್ನಷ್ಟು ಮತ್ತಷ್ಟು ಇಂತಹ ಸುಂದರ ಕವಿತೆಗಳನ್ನು ಓದಿಸಿ ಪ್ಲೀಸ್..!!

ಸಾಗರದಾಚೆಯ ಇಂಚರ said...

ದಿಲೀಪ್ ಸರ್,
ಖಂಡಿತ ಬರೀತೀನಿ ಕವಿತೇನ,
ನಿಮ್ಮ ಪ್ರೋತ್ಸಾಹ ಸದಾ ಇರಲಿ
ಸದಾ ಬರ್ತಾ ಇರಿ

SANTOSH MS said...

The poem is good and encouraging. I felt that in the 3rd stanza tangaali could be replaced by tampu so that the same word gaali will not be a repetition in that line.

ಸಾಗರದಾಚೆಯ ಇಂಚರ said...

Dear Santhosh,

Thanks for your comments, Keep visiting

ಚಂದಿನ | Chandrashekar said...

ಕವಿತೆ ಸುಂದರವಾಗಿ ಮೂಡಿ ಬಂದಿದೆ....

ಸಾಗರದಾಚೆಯ ಇಂಚರ said...

ಚಂದಿನ ಸರ್,
ಸ್ವಾಗತ ಬ್ಲಾಗ್ ಗೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆ ಬರ್ತಾ ಇರಿ

Anonymous said...

ತುಂಬಾ ಚೆನ್ನಾಗಿ ಬರೆದಿದ್ದೀರಿ ಕವನವನ್ನು ಗುರುಮೂರ್ತಿಯವರೇ.
ನಿನ್ನ ಬಿಂಬ, ಚಂದ್ರ ಬಿಂಬ ಒಂದೆ ಆಗಿದೆ ಗೆಳತಿ ಮನಸು ತುಂಬಿದೆ. ಕೊನೆಯ ಸಾಲು ತುಂಬಾ ಇಷ್ಟವಾಯಿತು. ನಿಮ್ಮ ಗೆಳತಿ ನಿಜಕ್ಕೂ ಪುಣ್ಯವಂತೆ. .

Ranjita said...
This comment has been removed by the author.
Ranjita said...

ಸೂಪರ್ ಸಾಲುಗಳು ಗುರು ಅಣ್ಣ ,
ಸ್ಪೂರ್ತಿಗೆ ತಕ್ಕ ಸಾಲುಗಳೋ ?.. ಶಬ್ಧಗಳಿಗೆ ತಕ್ಕ ಸ್ಪೂರ್ತಿಯೋ ?

ಸಾಗರದಾಚೆಯ ಇಂಚರ said...

ಧನ್ಯವಾದಗಳು ರಂಜಿತ,
ಹೀಗೆ ಬರುತ್ತಿರು

ಸಾಗರದಾಚೆಯ ಇಂಚರ said...

ನಿಮ್ಮ ಹೆಸರೇನು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಜಕ್ಕೂ ಅಂಥಹ ಗೆಳತಿ ಪಡೆದ ನಾನು ಪುಣ್ಯವಂತ

ಹರೀಶ ಮಾಂಬಾಡಿ said...

ಕೇವಲ ಓದಿಸಿಕೊಂಡಲ್ಲ, ಹಾಡಿಸಿಕೊಂಡೂ ಹೋಗುತ್ತೆ.
ಗುನುಗುವಂತೆಯೂ ಮಾಡುತ್ತೆ.
ಕವನದ ಸಾಲುಗಳಲ್ಲಿರುವ ಕಾಳಜಿ ಅನನ್ಯ. ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

ಕವನ ಕೂಲಾಗಿದೆ :)
ಉಳಿದ ವಿಷಯಗಳನ್ನು ಈಗಾಗಲೇ ಎಲ್ಲರೂ ಹೇಳಿದ್ದಾರೆ :)

ಲೇಟಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...

ಸಾಗರದಾಚೆಯ ಇಂಚರ said...

ಹರೀಶ್ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ,
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತೋಷ
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಸುಧೇಶ್ ಸರ್
ನಿಮ್ಮ ಕಾಮೆಂಟಿಗೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ
ಬರ್ತಾ ಇರಿ

ಆನಂದ said...

ಕವಿತೆ ಚಿನ್ನಾಗಿದೆ...

ಸಾಗರದಾಚೆಯ ಇಂಚರ said...

ಆನಂದ
ಸ್ವಾಗತ ಬ್ಲಾಗಿಗೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಗೌತಮ್ ಹೆಗಡೆ said...

ಗುರಣ್ಣ ಪ್ರಾಸ ಚೊಲೋ ಬಂಜು :) ಚೊಲೋ ಇದ್ದು ::)