ಬದುಕಿನಲ್ಲಿ ಎಲ್ಲ ಕಡೆಯೂ ಸಂತಸ ಒದ್ದು ಕೊಂಡು ಬಿದ್ದಿರುವುದಿಲ್ಲ. ಅದೊಂದು ಹೂವಿನ ಮುಳ್ಳಿನ ಹಾಸಿಗೆ. ಮುಳ್ಳನ್ನು ಮೆಟ್ಟಿ ನೋವು ಸಿಕ್ಕಂತೆ ಹೂವನ್ನು ಮುಟ್ಟಿ ನಲಿವು. ಎಂಥಹ ಸಮಯ ಬಂದರೂ ನಾವು ನಮ್ಮ ಹೆತ್ತವರ ಪ್ರೀತಿಯ ಮರೆಯಬಾರದು. ಕಷ್ಟಕಾಲದಲ್ಲಿ ಜೊತೆಗೆ ಬರುವ ಆತ್ಮೀಯ ಸ್ನೇಹಿತನ ಮಾತುಗಳು ಎಂದಿಗೂ ಪೂರಕ ಮತ್ತು ಪ್ರೇರಕ. ಕೆಟ್ಟ ನೆನಪುಗಳು ಬಾಳಿನ ಅರ್ಧ ಸುಖವನ್ನೇ ತಿಂದು ಹಾಕುತ್ತವೆ. ನಾಳಿನ ಸುಂದರ ಬದುಕಿಗೆ ಕಾಯಬೇಕೆ ಹೊರತು ನಿನ್ನೆಯ ಕಹಿ ನೆನಪುಗಳಿಗೆ ಮರುಗುವುದಲ್ಲ. ಸಂಸಾರದಲ್ಲಿ ಸಮರಸ, ಬದುಕಿನಲ್ಲಿ ಸಂತಸ ಎರಡೂ ಮುಖ್ಯ. ಕೆಲವೊಮ್ಮೆ ನಮಗೆ ಇನ್ನೊಬ್ಬರ ಸಾಧನೆ ಸಹಿಸಲು ಅಸಾದ್ಯವಾಗುತ್ತದೆ. ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡಿ ಆದಷ್ಟು ಅವರನ್ನು ತುಳಿಯಲು ಪ್ರಯತ್ನ ಪಡುತ್ತೇವೆ. ನಮಗೆ ಇನ್ನೊಬ್ಬರು ಇಷ್ಟವಾಗದಿದ್ದರೆ ಅವರಿಂದ ದೂರವಿರಬೇಕೆ ಹೊರತು ಅವರನ್ನು, ಅವರ ಹೆಸರನ್ನು ಹಾಳು ಮಾಡುವುದಲ್ಲ. ಇನ್ನೊಬ್ಬರ ಮೇಲಿನ ಧ್ವೇಷ ನಮ್ಮನ್ನೇ ಕೊಲ್ಲುತ್ತದೆಯಷ್ಟೇ. ಈ ಮಣ್ಣಿನ ಋಣ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಅದರ ಋಣ ತೀರಿಸುವ ಜವಾಬ್ದಾರಿ ಪ್ರತೀ ಒಬ್ಬರ ಕರ್ತವ್ಯ. ಜನನಿ ಮತ್ತು ಜನ್ಮಭೂಮಿಯ ಮೇಲಿನ ಪ್ರೀತಿ ಇಮ್ಮಡಿಯಾಗುತ್ತ ಬದುಕು ಹಸನ್ಮುಖಿ ಯಾಗಬೇಕು ಎಂಬುದೇ ಕವನ ಆಶಯ.
ಮರೆಯುವ ಕ್ಷಣಗಳ ಬರೆದು ಇಡು
ಮನಸಿನ ಪುಟಗಳ ತೆರೆದು ಬಿಡು
ಕಾಡುವ ನೆನಪ ಕೆದಕದಿರು
ಸಿಹಿನೆನಪಿನ ಜೊತೆಗೆ ಬಾಳುತಿರು
ಇನಿಯನ ಮಾತಿಗೆ ಮುನಿಯದಿರು
ಸಂಗಾತಿಯ ಕಣ್ಣಲಿ ಬದುಕನಿಡು
ಸ್ನೇಹಿತನ ಹಿತನುಡಿ ಸತತ ಇಡು
ಕುಹಕವ ಬಗೆವರ ದೂರವಿಡು
ಹೆತ್ತವರ ಪ್ರೀತಿಯ ಅಳಿಸದಿರು
ಹೊತ್ತಿರುವ ಜನನಿಯ ಮರೆಯದಿರು
ಚುಚ್ಚುತ ಮನಸನು ಕೊಲ್ಲದಿರು
ಇಷ್ಟವಾಗದಿರೆ ದೂರವಿರು
ನೊಂದವರ ನೋವಿಗೆ ಅಭಯವಿಡು
ಕಂಡರಿಯದ ಮಾತಿಗೆ ಮರುಗದಿರು
ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು
ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು
27 comments:
ಕವನ ತುಂಬಾ ಚೆನ್ನಾಗಿದೆ......ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ....
ಕವನ ತುಂಬಾ ಚೆನ್ನಾಗಿದೆ......ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ....
kaduva nenapa kedukadiru
sihinenapina jothege baaluthiru....
thumba chennagide sir..
ಸರಳವಾದ ಸಾಲುಗಳಲ್ಲಿ ಮಹಾನ್ ತತ್ವಗಳನ್ನು ತಿಳಿಸಿದ್ದೀರಿ. ಧನ್ಯವಾದಗಳು.
ಗುರು ಸಾರ್..
ಕವನಕ್ಕೆ ಮೊದಲು ಬರೆದ ನಿಮ್ಮ ಮಾತುಗಳು... ಒಂಥರಾ ಕವನದ ಭಾವವನ್ನು ಮುನ್ನುಡಿಯಂತೆ ಹೇಳಿರುವಂತಿದೆ... ಚೆನ್ನಾಗಿದೆ...
ಶ್ಯಾಮಲ
ಸುಲಭವಾಗಿ ಅರ್ಥವಾಗುವಂತೆ ಕವನವಿದೆ. ಅದರೊಳಗೆ ಉತ್ತಮ ಅರ್ಥಗರ್ಭಿತ ವಿಚಾರಗಳನ್ನು ತಿಳಿಸಿದ್ದೀರಿ.
ಹಹಹ..ಓಹೋಹೋ....ಏನಿದು ಗುರುಜಿ...
ಗುರು ದೋಹೆ ಅನ್ನೋಣವೇ..??
ಚನ್ನಾಗಿದೆ ದ್ವಿಪದಿ ..ಆದ್ರೆ
ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು
ತೊಲಗು ಇಲ್ಲಿಂದ...ಅಂತ ಯಮರಾಜನೋ ಇಲ್ಲ ಕಸಬಾನೋ ಡಮಾರ್ ಅನ್ನಿಸಿದ್ರೆ ಹ್ಯಾಗೆ..??!!!
Chennagide Sir :) Ishtavaayitu..
sweet poem. I like your way of writing prose and then its evolution into poem :)
Sooparraagiddu Guru..
keep writing..:)
very nice lines.. I liked these very much -
ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು
ಮನಸಿನ ಪುಟಗಳ ತೆರೆದು.. ಸಿಹಿ ನೆನಪುಗಳ ಲಹರಿಯಲಿ... ಬದುಕಿನ ಪುಟಗಳ ಮುಚ್ಚದಿರು. ಬಹುಶ: ಇಷ್ಟೊಂದು ಸರಳ ಪದಗಳಲ್ಲಿ ನನ್ನ ಅಂತರಂಗಕ್ಕೆ ತಾಕಿದ ಕವನ ಇದು, ಗುರು ಸರ್ ನಿಮ್ಮ ಭಾವದ ಕಣಜದಿಂದ ಇನ್ನು ಹೆಚ್ಚಿನ ಕವನಗಳು ಮೂಡಿಬರಲಿ.
ನಮಸ್ಕಾರ ಗುರು, ಬರಹ ಓದಿ ಸಂತೋಷವಾಯಿತು. ಉತ್ತಮ ಬರಹ. ಹೀಗೆ ತಮ್ಮ ಬರವಣಿಗೆ ಮುಂದುವರಿಯಲಿ.
nice one...
ಸುಂದರ ಕವಿತೆ ಗುರು ಸರ್.ನಿಮ್ಮಿಂದ ಇನ್ನಷ್ಟು ಒಳ್ಳೆಯ ಕವಿತೆಗಳು ಬರಲಿ.ನಮಸ್ಕಾರ.ಬ್ಲಾಗಿಗೆ ಭೇಟಿ ಕೊಡಿ.
ಸರಳ ಶಬ್ದಗಳಲ್ಲಿ ಮಹತ್ತರವಾದ ಅರ್ಥವ೦ತಿಕೆ ಅಡಗಿದೆ, ಚೆನ್ನಾಗಿದೆ ಗುರು
ಚೆಂದದ ಭಾಷೆ, ಸೊಗಸಾದ ಬರಹ
-ಚಿತ್ರಾ
ಗುರು ,
ಅರ್ಥ ಪೂರ್ಣ ಕವನ .
" ಏನೇ ಆಗಲಿ ಬರೆಯುತಿರು
ಬ್ಲಾಗನು ಎಂದೂ ಮರೆಯದಿರು ! "
good one... :) keep writing.
ಜೀವನದ ತಿರುಳನ್ನು ಸರಳವಾದ ಪದಗಳಲ್ಲಿ ಬಿಡಿಸಿ ಹೇಳಿದ್ದೀರ.. ಚೆನ್ನಾಗಿದೆ...
ಚೆನ್ನಾಗಿದೆ ಕವನ ಗುರು ಅವರೇ..
[url=crush-the-castle.com]Crush The Castle[/url]
ಸಾಗರದಾಚೆಯ ಇಂಚರ ಭಾವಪೂರ್ಣವಾಗಿದೆ.ಬದುಕಿನ ಮೌಲ್ಯಗಳನ್ನು ಬಹಳ ಸುಂದರವಾಗಿ ಹೆಣೆದಿದ್ದೀರಿ.ಧನ್ಯವಾದಗಳು.ನಮ್ಮ ಬ್ಲಾಗ್ ಗೂ ಒಮ್ಮೆ ಭೇಟಿ ಕೊಡಿ..ನಮಸ್ಕಾರ .
Thanks to each and every one
Dear Guru Sir,
Really marvelous. Beautiful lines and touching.
kaaduva nenepugala mooteyanu dooradalli bisaadalu... ondhu rayatna.... hettavara preetige.. sari saati innelli... thumbaa artha poornavaada ssaalugalu sir,
very nice i liked it very much.....good thought ...if u not able to good for someone...at least dont do bad alva.....:)
Post a Comment